ಮರುರೂಪಗಳು
ಮಹಾದೇವರ ಕೃತಿಗಳನ್ನು ತಮ್ಮ ಸಾಮರ್ಥ್ಯದಿಂದ ಅವರ ಸಹ ಪಯಣಿಗರು ಹೊಸರೂಪಗಳಲ್ಲಿ ಸೃಷ್ಟಿಸಿರುವ ಅನಾವರಣ, ಮತ್ತು ಅವರ ಕೃತಿಗಳ ಕುರಿತ ಸ್ಪಂದನ ಈ ಮರುರೂಪಗಳು.
ಮಹಾದೇವ ಅವರ ‘ಕುಸುಮಬಾಲೆ’ ಪಿಚ್ಚಳ್ಳಿ ಶ್ರೀನಿವಾಸ್ ಅವರ ಸಿರಿಕಂಠದಿಂದ ಕಥನ ಕಾವ್ಯವಾಗಿ ಹರಿದು ಸಿ.ಡಿ ರೂಪದಲ್ಲಿ ಹೊರಬರುತ್ತಿದೆ. ಅದರ ಒಂದು ತುಣುಕು ”ಈ ಜೀವವೇ …. ಆ ಜೀವಕೆ ನಡಿ ..’
-
[ದೇವನೂರ ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ ಕುರಿತು ಖ್ಯಾತ ಪತ್ರಕರ್ತರೂ ಹಾಗೂ ಸಂಸ್ಕೃತಿ ಚಿಂತಕರೂ ಆದ ಎನ್.ಎಸ್. ಶಂಕರ್ ಅವರು ಜೂನ್ 2, 2014ರಂದು ‘ಅವಧಿ’ ಅಂತರ್ಜಾಲ ಪತ್ರಿಕೆಗೆ ಹಾಗೂ ಜನವರಿ 2015ರ ಕನ್ನಡ ಪುಸ್ತಕ ಪ್ರಾಧಿಕಾರದ ನಿಯತಕಾಲಿಕ, ಪುಸ್ತಕಲೋಕಕ್ಕೆ ಬರೆದ ಬರಹ ನಮ್ಮ ಮರು ಓದಿಗಾಗಿ…]
ಮುಂದೆ ನೋಡಿ -
ದೇವನೂರರ ; ‘ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ’ ಕಥೆ ಕುರಿತು ಅರವಿಂದ ಮಾಲಗತ್ತಿ ಅವರು ಬರೆದ ಈ ಲೇಖನ ಅವರ ‘ಸಾಹಿತ್ಯ ಸಾಕ್ಷಿ’ ಲೇಖನಗಳ ಸಂಗ್ರಹದಲ್ಲಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ.
ಮುಂದೆ ನೋಡಿ -
ದೇವನೂರ ಮಹಾದೇವರ ‘ಒಡಲಾಳ’ ಕುರಿತು ಯು.ಆರ್.ಅನಂತಮೂರ್ತಿಯವರು ಬರೆದ ಲೇಖನಗಳು – (ರುಜುವಾತು – 12, ಅಕ್ಟೋಬರ್-ಡಿಸೆಂಬರ್, 83.)
ಹಾಗೂ
– (ತ.ಸು.ಶಾಮರಾಯರ ಅಭಿನಂದನ ಗ್ರಂಥ ‘ಸ್ವಸ್ತಿ’ಯಲ್ಲಿ ಪ್ರಕಟವಾದ ಲೇಖನ (ತಳುಕಿನ ವೆಂಕಣ್ಣಯ್ಯನವರ ಸ್ಮಾರಕ ಗ್ರಂಥಮಾಲೆ), ಮೈಸೂರು. 1983.) ಗಳಲ್ಲಿ ಪ್ರಕಟವಾಗಿದೆ
ಮುಂದೆ ಓದಿ -
ಗಾಂಧಿವಾದದ ಹಿನ್ನೆಲೆಯಲ್ಲಿ ಸ್ತ್ರೀವಾದ ಮತ್ತು ಹೊಸಗನ್ನಡ ಸಾಹಿತ್ಯದಲ್ಲಿ ಮಹಿಳಾ ಪಾತ್ರದ ವಸ್ತು ನಿರ್ವಹಣೆಯ ಕುರಿತು ವಿಮರ್ಶಾತ್ಮಕವಾಗಿ ಡಾ.ಪ್ರೀತಿ ಶುಭಚಂದ್ರ ಈ ಲೇಖನದಲ್ಲಿ ನಿರೂಪಿಸಿದ್ದಾರೆ. ಹಂಪಿ ವಿಶ್ವವಿದ್ಯಾಲಯ ಹೊರತರುತ್ತಿದ್ದ ‘ಮಹಿಳಾ ಅಧ್ಯಯನ’-ಉತ್ತರಾಯಣ ಸಂಚಿಕೆ ಜನವರಿ 1999, ಸಂಪುಟ 1, ಸಂಚಿಕೆ 1ರಲ್ಲಿ ಈ ಲೇಖನ ದಾಖಲಾಗಿದೆ. ಈ ಸಂಚಿಕೆಯ ಸಂಪಾದಕರು ಡಾ.ಎಚ್.ಎಸ್.ಶ್ರೀಮತಿಯವರು. ನಮ್ಮ ಮರು ಓದಿಗಾಗಿ ಈ ಲೇಖನ.
ಮುಂದೆ ಓದಿ -
-
-
ಡಾ. ಮಹೇಶ್ವರಿ.ಯು ಅವರು ಕುಸುಮಬಾಲೆ ಕುರಿತು ಬರೆದ ಬರಹ ಅವರ ‘ಮಧುರವೇ ಕಾರಣ’ ಎಂಬ ಲೇಖನಗಳ ಸಂಕಲನದಲ್ಲಿ ದಾಖಲಾಗಿದೆ. ಬರಹ ನಮ್ಮ ಮರು ಓದಿಗಾಗಿ…
ಮುಂದೆ ಓದಿ -
[In this essay presented by Kikkeri Narayan at an international conference, ‘Kusumbale’ is analyzed keeping Bhaktin’s theory at the centre. ಕಿಕ್ಕೇರಿ ನಾರಾಯಣ ಅವರು ಅಂತಾರಾಷ್ಟ್ರೀಯ ಸಮಾವೇಶ ಒಂದರಲ್ಲಿ ಮಂಡಿಸಿದ ಈ ಪ್ರಬಂಧದಲ್ಲಿ ಭಕ್ತಿನ್ ಥಿಯರಿಯನ್ನು ಕೇಂದ್ರದಲ್ಲಿ ಇಟ್ಟುಕೊಂಡು ‘ಕುಸುಮಬಾಲೆ’ ಯನ್ನು ವಿಶ್ಲೇಷಿಸಲಾಗಿದೆ. ಆ ಲೇಖನ ನಮ್ಮ ಓದಿಗಾಗಿ …. ]
ಮುಂದೆ ನೋಡಿ -
ದೇವನೂರ ಮಹಾದೇವ ಅವರ ‘ಕುಸುಮಬಾಲೆ’ಯ ಕುರಿತು ವಿಮರ್ಶಕ ರಾಜೇಂದ್ರ ಚೆನ್ನಿ ಅವರು ಬರೆದ ಬರಹ ಅವರ ‘ಅಮೂರ್ತತೆ ಮತ್ತು ಪರಿಸರ’ ಕೃತಿಯಲ್ಲಿದೆ. ಅದು ನಮ್ಮ ಬನವಾಸಿಯಲ್ಲಿ ಮರು ಓದಿಗಾಗಿ…..
ಮುಂದೆ ಓದಿ -
ರಚನಾವಾದವನ್ನು ಕೇಂದ್ರದಲ್ಲಿ ಇಟ್ಟುಕೊಂಡು ದೇವನೂರರ ‘ಕುಸುಮಬಾಲೆ’ಯನ್ನು ವಿಶ್ಲೇಷಿಸಿರುವ ವಿಮರ್ಶಕ ಕೆ.ವಿ.ತಿರುಮಲೇಶ್ ಅವರ ಈ ಬರಹ ಅವರ ‘ಉಲ್ಲೇಖ’ ಎಂಬ ಕೃತಿಯಲ್ಲಿ ದಾಖಲಾಗಿದೆ. ನಮ್ಮ ಮರು ಓದಿಗಾಗಿ ಈ ಬರಹ.
ಮುಂದೆ ನೋಡಿ