‘ದೇವನೂರು ಮಹಾದೇವ’ ಸಾಕ್ಷ್ಯಚಿತ್ರದಲ್ಲಿ–ಯೋಗೇಂದ್ರ ಯಾದವ್
[ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೆ.ಶಿವರುದ್ರಯ್ಯ ನಿರ್ದೇಶನದ ‘ದೇವನೂರು ಮಹಾದೇವ’ ಸಾಕ್ಷ್ಯಚಿತ್ರದಲ್ಲಿ-ಯೋಗೇಂದ್ರ ಯಾದವ್ ಮಾತುಗಳು. ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
“ಹಿಂದುಳಿದ ವರ್ಗಗಳ ಮೀಸಲಾತಿ ಕಲ್ಪಿಸಿದ ಎಲ್.ಜಿ. ಹಾವನೂರು, ಅದನ್ನು ಅನುಷ್ಠಾನಗೊಳಿಸಿದ ದೇವರಾಜ ಅರಸು, ಸಾಹಿತ್ಯ ಮತ್ತು ಚಳವಳಿ ಕ್ಷೇತ್ರದಲ್ಲಿ ದೇವನೂರು ಮಹಾದೇವ, ಡಿ.ಆರ್. ನಾಗರಾಜ್ ಅವರ ಆಲೋಚನೆ ಕ್ರಮಗಳು ಈ ನೆಲಕ್ಕೆ ನೀಡಿರುವ ಕೊಡುಗೆಗಳು ಮಹತ್ವದೆಂದು ನನಗನಿಸುತ್ತದೆ.”
