ಪ್ರೊ.ಕೆ.ಸುಮಿತ್ರಾಬಾಯಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ದೇವನೂರ ಮಹಾದೇವ ಅವರ ಪತ್ನಿ ಲೇಖಕಿ ಪ್ರೊ.ಕೆ.ಸುಮಿತ್ರಾಬಾಯಿ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು, ಅವರ ಬಾಳ ಕಥನ “ಸೂಲಾಡಿ ಬಂದೋ ತಿರುತಿರುಗಿ” ಕೃತಿಗೆ 27.9.2021 ರಂದು ನೀಡಲಾಯ್ತು. ಅವರು ಕಾರಣಾಂತರಗಳಿಂದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತೆರಳಿರಲಿಲ್ಲವಾದ್ದರಿಂದ ಅಕಾಡೆಮಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನೆಗೇ ತೆರಳಿ ಪ್ರಶಸ್ತಿ ನೀಡಿ ಗೌರವಿಸಿದರು. ಆ ಸಂದರ್ಭದಲ್ಲಿ ತೆಗೆದ ಫೋಟೋಗಳನ್ನು ನಮ್ಮ ಬನವಾಸಿಗೆ ನೀಡಿದ ಆಂದೋಲನ ಪತ್ರಿಕೆಯ ಫೋಟೋಗ್ರಾಫರ್ ಗವಿಮಠ ರವಿ ಅವರಿಗೆ ಹಾಗೂ ಆಂದೋಲನ ಪತ್ರಿಕೆಗೆ ನಮ್ಮ ಹೃದಯಪೂರ್ವಕ ವಂದನೆಗಳು.