ಪ್ರಿಯಾಂಕ್ ಖರ್ಗೆ ಅವರೊಂದಿಗೆ ದೇವನೂರ ಮಹಾದೇವ ಅವರ ಚರ್ಚೆ….

[ಟಿ.ನರಸೀಪುರ ತಾಲೂಕಿನ ದಲಿತ ಸಂಘರ್ಷ ಸಮಿತಿ 14.6.2022ರಂದು ಆಯೋಜಿಸಿದ್ದ “ಬುದ್ಧ, ಬಸವ,ಅಂಬೇಡ್ಕರ್ ಮಾರ್ಗದೆಡೆಗೆ ನಮ್ಮ ಚಿಂತನೆ” ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ನಾಯಕರಾದ ಪ್ರಿಯಾಂಕ್ ಖರ್ಗೆ ಭಾಗವಹಿಸಿದ ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಅವರನ್ನು ತಮ್ಮ ಮನೆಗೆ ಕರೆಸಿ, ನೂತನ ಪಠ್ಯ ಪುಸ್ತಕ ಮರು ಪರಿಷ್ಕರಣೆಯ ವಿರುದ್ದದ ಹೋರಾಟದ ಬಗ್ಗೆ ಚರ್ಚೆ ನಡೆಸಿದರು. ‘ಈ ಕುರಿತಂತೆ ದೊಡ್ಡಮಟ್ಟದ ಆಂದೋಲನ ರಚಿಸುವುದರ ಬಗ್ಗೆ ಯೋಜನೆ ರೂಪಿಸಲಾಗುತ್ತಿದ್ದು, ಕರ್ನಾಟಕದ ಅಸ್ಮಿತೆ, ಮಹನೀಯರ ಗೌರವ ಹಾಗೂ ನಾಡಿನ ಮಕ್ಕಳ ಭವಿಷ್ಯದ ರಕ್ಷಣೆಗೆ ತಾವು ಸದಾ ಬದ್ಧರಾಗಿದ್ದೇವೆ’ ಎಂದವರು ನುಡಿದರು]