ಪರ್ಯಾಯ ರಾಜಕಾರಣ ಸಮಾಲೋಚನಾ ಸಮಾವೇಶ….2004

[ಕರ್ನಾಟಕದಲ್ಲಿ ರೈತ ಸಂಘಟನೆ ಮತ್ತು ದಲಿತ ಸಂಘರ್ಷ ಸಮಿತಿಯ ಒಗ್ಗೂಡುವಿಕೆಯ ಮೂಲಕ ನಡೆದ ಪರ್ಯಾಯ ರಾಜಕಾರಣ ಕಟ್ಟುವ ಪ್ರಕ್ರಿಯೆಗಳು ದೇಶದಲ್ಲೇ ಅತ್ಯಂತ ಅಪರೂಪವಾದುದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. 2003-2004ರ ಸುಮಾರಿಗೆ ಪರ್ಯಾಯ ರಾಜಕಾರಣದ ಚರ್ಚೆಗಳು ಪ್ರಾರಂಭಗೊಂಡಿತು. 2005ರ ಹೊತ್ತಿಗೆ ಅದು  ತೀವ್ರಗೊಂಡು ಸರ್ವೋದಯ ಕರ್ನಾಟಕ ಪಕ್ಷವು ಹುಟ್ಟಿಕೊಂಡಿತು. ಈ ಚರ್ಚೆಯ ಹಿನ್ನೆಲೆಯಲ್ಲಿ, ಪ್ರಾರಂಭದ ದಿನಗಳಲ್ಲಿ, ಮೈಸೂರಿನಲ್ಲಿ ದಿನಾಂಕ 26.4.2004ರಲ್ಲಿ ನಡೆದ ಪರ್ಯಾಯ ರಾಜಕಾರಣ ಕುರಿತ ಸಮಾಲೋಚನಾ ಸಮಾವೇಶದ ಚಿತ್ರ ಇಲ್ಲಿದೆ. ಚಿತ್ರದಲ್ಲಿ – ಸಂಸದರಾಗಿದ್ದ ತುಳಸೀದಾಸ್ ದಾಸಪ್ಪ, ದೇವನೂರ ಮಹಾದೇವ, ಸಿ.ಮುನಿಯಪ್ಪ, ಇಂದೂಧರ ಹೊನ್ನಾಪುರ, ಗುರುಪ್ರಸಾದ್ ಕೆರಗೋಡು ಅವರಿದ್ದಾರೆ. ಚಿತ್ರವನ್ನು ತೆಗೆದು, ಅಪರೂಪದ ಚಿತ್ರವನ್ನು ಕಾಪಿರಿಸಿ ನಮ್ಮ ಬನವಾಸಿಗೆ ನೀಡಿದ ಫೋಟೋಗ್ರಾಫರ್ ನೇತ್ರರಾಜು ಅವರಿಗೆ ಹಾಗೂ ಸಂಬಂಧಿಸಿದ ವಿವರಣೆ ಮತ್ತು ಮಾಹಿತಿ ನೀಡಿದ ಇಂದೂಧರ ಹೊನ್ನಾಪುರ ಹಾಗೂ ದೇವನೂರ ಮಹಾದೇವ ಅವರಿಗೆ ತಂಡದ ಕೃತಜ್ಞತೆಗಳು)