ಭಾವಪರದೆ
ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.
-
ದಕ್ಷಿಣ ಭಾರತದ ದಲಿತ ಹೋರಾಟಗಾರರ ಸಮಾವೇಶವು 6.9.2018 ರಂದು ಬೆಂಗಳೂರಿನಲ್ಲಿ ನಡೆದಿದ್ದು ಅದರಲ್ಲಿ ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು, ದಲಿತ ನಾಯಕರು, ಚಿಂತಕರು ದುಂಡು ಮೇಜಿನ ಸಭೆ ನಡೆಸಿದರು. ನಂತರ ಸಮಾವೇಶವು ಉದ್ಘಾಟನೆಗೊಂಡಿತು. ಚಿತ್ರದಲ್ಲಿ ದೇವನೂರ ಮಹಾದೇವ, ಜಿಗ್ನೇಶ್ ಮೇವಾನೀ, ಇಂದೂಧರ ಹೊನ್ನಾಪುರ, ವಿ.ನಾಗರಾಜ್ ಮುಂತಾದವರಿದ್ದಾರೆ.
ಮುಂದೆ ನೋಡಿ -
2018ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ BCSuddi.com online news Channel ದೇವನೂರ ಮಹಾದೇವ ಅವರನ್ನು ಮಾತನಾಡಿಸಿದಾಗ ಆಡಿದ ಮಾತುಗಳ ಚಿತ್ರಮುದ್ರಿಕೆ ಮತ್ತು ಚುನಾವಣಾ ಸಂದರ್ಭದ ಮಂತ್ರಾಲೋಚನೆಯ ಛಾಯಾಚಿತ್ರ …
ಮುಂದೆ ನೋಡಿ -
ಪ್ರೊ.ಸುಮಿತ್ರಾಬಾಯಿಯವರ ‘ಸೂಲಾಡಿ ಬಂದೋ ತಿರುತಿರುಗಿ’ ಬಾಳಕಥನದ ಬಿಡುಗಡೆ ಕಾರ್ಯಕ್ರಮವು 29.7.2018ರಂದು ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ನಡೆಯಿತು. ಪ್ರೊ.ಚ.ಸರ್ವಮಂಗಳ ಅವರು ಪುಸ್ತಕ ಬಿಡುಗಡೆ ಮಾಡಿದರು. ಶ್ರೀ.ಎನ್.ಬೋರಲಿಂಗಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಎಂ.ಎಸ್.ಶೇಖರ್ ಅವರು ಪುಸ್ತಕ ಕುರಿತು ಮಾತನಾಡಿದರು. ಪುಸ್ತಕವು ಮೈಸೂರಿನ ಅಭಿರುಚಿ ಪ್ರಕಾಶನದಿಂದ ಪ್ರಕಟಗೊಂಡಿದ್ದು ಆಸಕ್ತರು ಅಭಿರುಚಿ ಗಣೇಶ್ ಅವರನ್ನು ಸಂಪರ್ಕಿಸಬಹುದು. 9980560013
ಮುಂದೆ ನೋಡಿ -
ದೇವನೂರ ಮಹಾದೇವ ಅವರ ಮನೆಗೆ ಮಾನ್ಯ ಶಿಕ್ಷಣ ಸಚಿವರಾದ ಎನ್.ಮಹೇಶ್ ಅವರು 18.6.2018 ರಂದು ಭೇಟಿ ನೀಡಿ ಶಿಕ್ಷಣ ಕ್ಷೇತ್ರದ ಹಲವು ಸಮಸ್ಯೆಗಳ ಕುರಿತು ಚರ್ಚಿಸಿದರು.
ಮುಂದೆ ನೋಡಿ -
ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ 10.12.2017 ರಂದು ಸಕಲೇಶಪುರದ ರಕ್ಷಿದಿಯ ರಂಗಕರ್ಮಿ, ಲೇಖಕ ರಕ್ಷಿದಿ ಪ್ರಸಾದ್ ಅವರ ಅಕಾಲಿಕ ಸಾವಿಗೀಡಾದ ಮಗಳು ಅಮೃತ ಅವರು ಬರೆದ ಐದು ಸಂಪುಟಗಳ ‘ಅಮೃತಯಾನ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮೊದಲ ಪ್ರತಿಯನ್ನು ದೇವನೂರ ಮಹಾದೇವ ಅವರಿಗೆ ನೀಡಲಾಯ್ತು. ಸಮಾರಂಭದಲ್ಲಿ ಕೇಸರಿ ಹರವೂ, ಡಾ.ಕೆ.ಆರ್.ಅಶೋಕ್, ಮೀನಾ ಮೈಸೂರು, ಕೆ.ಪಿ.ಸುರೇಶ, ಅಭಿರುಚಿ ಗಣೇಶ್, ಪ್ರಸಾದ್ ರಕ್ಷಿದಿ, ರಾಧೇ ರಕ್ಷಿದಿ ಇತರರು ಇದ್ದರು.
ಮುಂದೆ ನೋಡಿ -
ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಹಾಲ್ನಲ್ಲಿ 4.12.2017 ರಂದು ಆಯೋಜಿಸಲಾಗಿದ್ದ ಗೌರಿ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ ಮತ್ತು ವಿಚಾರಸಂಕಿರಣದಲ್ಲಿ ಮಾತನಾಡಿದ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರ ಮಾತುಗಳ ನೋಡಿಯೋ ಕೃಪೆ THE STATE ಆನ್ ಲೈನ್ ಪತ್ರಿಕೆ. ಮತ್ತು ಪ್ರಜಾವಾಣಿ ವರದಿ ಮತ್ತು ಫೋಟೋ ಕೃಪೆ ]
ಮುಂದೆ ನೋಡಿ -
[ಉದ್ಯೋಗಕ್ಕಾಗಿ ಯುವಜನರು ಆಂದೋಲನದ- ಉದ್ಯೋಗಕ್ಕೆ ಓಟು, ಉದ್ಯೋಗ ಇಲ್ಲ ಅಂದ್ರೆ ಓಟಿಲ್ಲ … ಮೈಸೂರಿನಲ್ಲಿ 11.8.2017ರಂದು ನಡೆಸಿದ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರ ಮಾತುಗಳು… ವಿಡಿಯೋ ಕೃಪೆ-Youth4Employment.com]
ಮುಂದೆ ನೋಡಿ -
ಆಂದೋಲನ ಪತ್ರಿಕೆಯ ಸಂಪಾದಕರಾದ ರಾಜಶೇಖರ ಕೋಟಿ ಅವರನ್ನು ನೆನಪಿಸಿಕೊಂಡ ದೇವನೂರು ಮಹಾದೇವ ಅವರು www.thestate.news ಆನ್ ಲೈನ್ ಪತ್ರಿಕೆಯ ನೋಡಿಯೋದಲ್ಲಿ ಮಾತನಾಡಿರುವುದು.
ಮುಂದೆ ನೋಡಿ -
ರಾಯಚೂರಿನಲ್ಲಿ 29.10.2017ರಂದು ನಡೆದ ಮದ್ಯಪಾನ ನಿಷೇಧ ಆಂದೋಲನಕ್ಕೆ ಬೆಂಬಲವಾಗಿ ದೇವನೂರ ಮಹಾದೇವ ಅವರ ನುಡಿಗಳು.
ಮುಂದೆ ನೋಡಿ -
22.10.2017 ರಂದು ಮೈಸೂರಿನಲ್ಲಿ ನಡೆದ ಸ್ವರಾಜ್ ಇಂಡಿಯಾ ಕ್ರಿಯಾಶೀಲ ಕಾರ್ಯಕರ್ತರ ಸಭೆ ಮತ್ತು ಮೈಸೂರು ನಗರ ಮತ್ತು ಗ್ರಾಮಾಂತರ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ದೇವನೂರ ಮಹಾದೇವ ಅವರ ಆಶಯ ನುಡಿ.
ಮುಂದೆ ನೋಡಿ