ಭಾವಪರದೆ

ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.

 

  • [ಬಯಲು ಬಳಗ, ಶ್ರಮಣ ಸಂಸ್ಕೃತಿ ಟ್ರಸ್ಟ್ (ರಿ)ಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಹಯೋಗದೊಂದಿಗೆ  ಮೈಸೂರಿನಲ್ಲಿ 13 & 14 ಜನವರಿ  2024ರಂದು ನಡೆಸಿದ ರಾಜ್ಯ ಮಟ್ಟದ ವಿಚಾರ ಕಮ್ಮಟದಲ್ಲಿ ಭಾಗಿಯಾಗಿ ಮಾತನಾಡಿದ ದೇವನೂರ ಮಹಾದೇವ ಅವರು… ಫೋಟೋ ಕೃಪೆ- ಶ್ರೀ ಶ್ರೀನಿ] ಮಾತುಗಳನ್ನು ರಂಗನಾಥ ಕಂಟನಕುಂಟೆ ಅವರ ಫೇಸ್ ಬುಕ್ ಲಿಂಕ್ ಮೂಲಕ ಆಲಿಸಬಹುದು


    »
  • [ಮೈಸೂರಿನ ಮಾನಸಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರದಲ್ಲಿ8.1.2024 ರಂದು ನಡೆದ “ಗಾಂಧಿ- ಅಂಬೇಡ್ಕರ್ ಪ್ರಸ್ತುತತೆ”- ಕಾರ್ಯಕ್ರಮದಲ್ಲಿ ಖ್ಯಾತ ಲೇಖಕ, ಚರಿತ್ರಕಾರ ಪ್ರೊ.ರಾಮಚಂದ್ರಗುಹಾ ಅವರು ಸಂವಾದಗೋಷ್ಠಿಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ,  ಅವರ ಜೊತೆಗೆ ದೇವನೂರ ಮಹಾದೇವ ಹಾಗೂ ವಿವೇಕ ಶಾನಭಾಗ ಉಪಸ್ಥಿತರಿದ್ದರು… ಜೊತೆಗೆ ಅವರು ದೇಮ  ಮನೆಗೆ ಭೇಟಿಯನ್ನು ನೀಡಿದ್ದರು. ವಿಡಿಯೋ ಕೃಪೆ-ಮೈಸೂರು ವಿಶ್ವವಿದ್ಯಾನಿಲಯ,  ಫೋಟೋ ಕೃಪೆ- ಶ್ರೀ ಶ್ರೀನಿ, ]


    »
  • [ದೇವನೂರು ಮಹಾದೇವ ಅವರು 2013 ರಲ್ಲಿ ಬೆಂಗಳೂರು ಬಸವ ಸಮಿತಿಗೆ ಉಪನ್ಯಾಸಕ್ಕೆ ಹೋದಾಗ.. ತೆಗೆದ ಚಿತ್ರಗಳನ್ನು ನಮ್ಮ ಬನವಾಸಿಗಾಗಿ ಕಳಿಸಿದ  ಶಿವಕುಮಾರ ಪಾವಟೆ  ಅವರಿಗೆ ಧನ್ಯವಾದಗಳು.  ಚಿತ್ರದಲ್ಲಿ ದೇವನೂರು ಮಹಾದೇವ, ಶ್ರೀ ರಂಜಾನ್ ದರ್ಗಾ ಅವರು (ಬೆನ್ನು ತಿರುಗಿಸಿದವರು )ಮತ್ತು ಶಿವಕುಮಾರ ಪಾವಟೆ]


    »
  • [ಬೆಂಗಳೂರಿನ ಬಳಿಯ ಹೊಸಕೋಟೆಯಿಂದ  2023ರ ಡಿಸೆಂಬರ್ ತಿಂಗಳಿನಲ್ಲಿ ತಮ್ಮನ್ನು ನೋಡಿ ಮಾತಾಡಲು  ಉಪನ್ಯಾಸಕರೊಂದಿಗೆ ಆಗಮಿಸಿದ ವಿದ್ಯಾರ್ಥಿಗಳೊಂದಿಗೆ ದೇವನೂರ ಮಹಾದೇವ ಅವರು. ಜೊತೆಗೆ ಮಿತ್ರರಾದ ಶ್ರೀರಾಂ, ಅಭಿರುಚಿ ಗಣೇಶ್, ಮಗಳು ಡಾ.ಮಿತಾ ಹಾಗೂ ಅಳಿಯ ಅವಿನಾಶ್ ಅವರೊಂದಿಗೆ ಸೇರಿ ಕುವೆಂಪು ರಚಿತ ಬೊಮ್ಮನ ಹಳ್ಳಿಯ ಕಿಂದರಜೋಗಿ ಪುಸ್ತಕವನ್ನು ವಿದ್ಯಾರ್ಥಿಗಳಿಗೆ  ನೀಡಿದರು. ಮತ್ತು ತಮ್ಮ ಎದೆಗೆ ಬಿದ್ದ ಅಕ್ಷರ ಕೃತಿಯ “ಹುಟ್ಟುತ್ತಾ ವಿಶ್ವ ಮಾನವ” ಲೇಖನವನ್ನು ಕಡ್ಡಾಯವಾಗಿ  ಓದಲು ಸೂಚಿಸಿದರು. ಫೋಟೋ ಹಾಗೂ ವಿಡಿಯೋ ಕೃಪೆ-ಅಭಿರುಚಿ ಗಣೇಶ್] 


    »
  • [ನಮ್ಮ ಬನವಾಸಿ ಅಂತರ್ಜಾಲ ತಾಣಕ್ಕೆ ಒಂಭತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ 2023ರ ಈ ವರ್ಷ ದೊರಕಿದ ಫೋಟೋಗಳ ಗುಚ್ಛ] 


    »
  • [ಎಸ್‌ಕೆಎಂ, ಜೆಸಿಟಿಯು ಜಂಟಿಯಾಗಿ ಕರೆ ನೀಡಿದ್ದ
    ಜನವಿರೋಧಿ ಮತ್ತು ಕಾರ್ಪೋರೇಟ್ ನೀತಿಗಳ ವಿರುದ್ದ ದುಡಿಯುವ ಜನರ “ಮಹಾಧರಣಿ” 2023ರ ನವೆಂಬರ್ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಿತು.
    ಅದರ ಅಂಗವಾಗಿ ನಡೆದ ಬಹಿರಂಗ ಸಭೆಯ ಅತಿಥಿಗಳಾಗಿ ಮಾತಾಡಿದ ದೇವನೂರ ಮಹಾದೇವ ಅವರ ಮಾತುಗಳು…ಇಲ್ಲಿವೆ.]


    »
  • [10.10.2023ರಂದು  ಡಾ.ಸುಶ್ರುತ ಅವರ ಕಚೇರಿಗೆ  ದೇವನೂರು ಮಹಾದೇವ ಅವರು ಸೌಹಾರ್ದ ಭೇಟಿ ನೀಡಿದಾಗ…ಅವರು ದೇವನೂರ ಅವರ ಯೋಗಕ್ಷೇಮ ವಿಚಾರಿಸಿ, ಹಲವು ವಿಷಯಗಳ ಕುರಿತು ಅವರೊಂದಿಗೆ ಚರ್ಚಿಸಿದ ಸಂದರ್ಭ… ]


    »
  • [14.10.2023ರಂದು ಮೈಸೂರು ವಿಶ್ವವಿದ್ಯಾಲಯದ, ವಿಜ್ಞಾನ ಭವನದಲ್ಲಿ ನಡೆದ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿ.ಜಿ.ವಿ.ಎಸ್) ಸರ್ವಸದಸ್ಯರ ಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಸಭಿಕರಾಗಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರೊಂದಿಗೆ ಬಿಜಿವಿಎಸ್ ಪ್ರತಿನಿಧಿಗಳು. ](ಫೋಟೋ ಕೃಪೆ- ಅಹಮದ್ ಹಗರೆ)


    »
  • ದೇವನೂರ ಮಹಾದೇವ ಅವರ ಕತೆ- ಮಾರಿಕೊಂಡವರು. ವಾಚನ- ಕಾಜೂರು ಸತೀಶ್


    »
  • ಬುಕ್ ಬ್ರಹ್ಮ ಅಂತರ್ಜಾಲ ತಾಣದಿಂದ ದೇವನೂರರ ಹುಟ್ಟುಹಬ್ಬದ ವಿಶೇಷ…2023


    »