ಭಾವಪರದೆ

ಮಹಾದೇವರು ವಿವಿಧ ಸಂದರ್ಭದಲ್ಲಿ ಆಡಿದ ಮಾತಿನ ಧ್ವನಿಮುದ್ರಿಕೆ, ಚಿತ್ರಮುದ್ರಿಕೆ, ಸ್ಥಿರಚಿತ್ರಗಳ ಸಮ್ಮಿಲನ ಈ ಭಾವಪರದೆಯ ಮೂರು ವಿಭಾಗದಲ್ಲಿ ಪ್ರತ್ಯೇಕವಾಗಿ ಜೋಡಣೆಯಾಗಿವೆ.

 

  • [ಮಂಡ್ಯ ಜಿಲ್ಲೆ ಬೇಬಿ ಬೆಟ್ಟದ ಜಾತ್ರಾ ಮಹೋತ್ಸವದ ಪ್ರಯುಕ್ತ 13.3.2024ರಂದು ನಡೆದ, ಉಚಿತ ಸಾಮೂಹಿಕ ಸರಳ ವಿವಾಹದಲ್ಲಿ ಭಾಗವಹಿಸಿ, ವಧು- ವರರನ್ನು ಆಶೀರ್ವದಿಸಿದ ದೇವನೂರ ಮಹಾದೇವ ಮತ್ತು ಪ್ರೊ.ಸುಮಿತ್ರಾಬಾಯಿ ಅವರು… ಫೋಟೋ ಕೃಪೆ- ನವೀನ್ ಕುಮಾರ]


    »
  • [13.3.2024ರಂದು  ಮಂಡ್ಯದಲ್ಲಿ ನಡೆದ “ಕುವೆಂಪು ಕ್ರಾಂತಿ ಕಹಳೆ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ದೇವನೂರ ಮಹಾದೇವ ಮತ್ತು ಪ್ರೊ.ಸುಮಿತ್ರಾಬಾಯಿ ಅವರು…
    ಫೋಟೋ ಕೃಪೆ- ನವೀನ್ ಕುಮಾರ]


    »
  • [ವಿವಿಧ ಭಾಗಗಳಿಂದ 10.3.2024ರಂದು ಮೈಸೂರಿಗೆ ಆಗಮಿಸಿದ್ದ ಆದಿವಾಸಿ ಮುಖಂಡರೊಂದಿಗೆ ಸಭೆಯಲ್ಲಿ ಭಾಗಿಯಾದ ದೇವನೂರ ಮಹಾದೇವ ಮತ್ತು ಪ್ರೊ.ಸುಮಿತ್ರಾಬಾಯಿ ಅವರು.
    ಫೋಟೋ ಕೃಪೆ- ಶ್ರೀ ಶ್ರೀನಿ]


    »
  • [ಪ.ಮಲ್ಲೇಶ್-90, ರ ನೆನಪಿನಲ್ಲಿ “ಭಾರತ ಜನತಂತ್ರದ ಸಮಕಾಲೀನ ತಲ್ಲಣಗಳು” ವಿಚಾರಸಂಕಿರಣವು 2024, ಮಾರ್ಚ್ 1 & 2ರಂದು, ಮೈಸೂರಿನ ಕಲಾಮಂದಿರದಲ್ಲಿ ನಡೆಯಿತು. ಆ‌ ಸಂದರ್ಭದಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಹಾಗೂ ಪ್ರೊ.ಸುಮಿತ್ರಾಬಾಯಿ ಅವರೊಂದಿಗೆ ಪ್ರೊ.ರವಿವರ್ಮ ಕುಮಾರ್ ಮತ್ತು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಮಾತುಕತೆ… ಫೋಟೋ ಕೃಪೆ- ಅಮೋಘ್ ಎಚ್.ಎಸ್.]


    »
  • [ದೇವನೂರ ಮಹಾದೇವ ಅವರ “ಅರ್ ಎಸ್ ಎಸ್ ಆಳ ಮತ್ತು ಅಗಲ” ಕೃತಿ ಹೊರಬಂದ ಸಂದರ್ಭದಲ್ಲಿ ಈ ಕುರಿತು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ ಮಾಧ್ಯಮದವರಿಗೆ ಉತ್ತರಿಸಿರುವುದು …. ]


    »
  • [ಮಂಡ್ಯ ಜಿಲ್ಲೆಯ ಪ್ರಗತಿಪರ ಒಕ್ಕೂಟ, 15.2.2024ರಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ, ‘ಮಂಡ್ಯ ಜಿಲ್ಲೆಯ ಉಳುಮೆ ಸಂಸ್ಕೃತಿಯ ಉಳುವಿಗಾಗಿ, ಶಾಂತಿ, ಸೌಹಾರ್ದತೆ, ಸಹಬಾಳ್ವೆಗಾಗಿ’ ನಡೆಸಿದ ಪ್ರತಿಭಟನಾ ಧರಣಿ ಉದ್ದೇಶಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳು. ಕೃಪೆ-ಜನಶಕ್ತಿ ಮೀಡಿಯಾ]


    »
  • [ಮೈಸೂರಿನಲ್ಲಿ 10.2.2024ರಂದು ರಾಜ್ಯ ಮೂಲ ಆದಿವಾಸಿ ವೇದಿಕೆ, ಕರ್ನಾಟಕದ ವತಿಯಿಂದ ನಡೆದ “ರಾಜ್ಯದ 12 ಮೂಲ ಆದಿವಾಸಿಗಳ ಸಂವಿಧಾನ ಬದ್ಧ ಹಕ್ಕಿನ ಬಗ್ಗೆ ಸಮಾಲೋಚನ ಸಭೆ”ಯಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಯೂಟ್ಯೂಬ್ ಕೊಂಡಿ ಮತ್ತು ಫೋಟೋಗಳು ]


    »
  • [3 ಫೆಬ್ರವರಿ 2024ರಂದು ಜಾಗೃತ ಕರ್ನಾಟಕ ವೇದಿಕೆಯು ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಅವರು  ಮಾಡಿದ “ವಿಚಾರ ಕ್ರಾಂತಿಗೆ ಆಹ್ವಾನ ಮತ್ತು ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ” ಎರಡು ಯುಗಪ್ರವರ್ತಕ ಭಾಷಣಗಳಿಗೆ 50 ವರ್ಷಗಳು ತುಂಬಿದ ನೆನಪಿನಲ್ಲಿ, ಮೈಸೂರಿನಲ್ಲಿ ನಡೆಸಿದ, “ಕುವೆಂಪು ಕ್ರಾಂತಿ ಕಹಳೆ-  50” -ಕವಿವಾಣಿಯಿಂದ  ಕರ್ನಾಟಕ ಮಾದರಿಯೆಡೆಗೆ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರು ಭಾಗವಹಿಸಿದ್ದಾಗಿನ ಕೆಲ ಚಿತ್ರಗಳು…  ಫೋಟೋ ಕೃಪೆ- ಶ್ರೀ ಶ್ರೀನಿ]


    »
  • [ಸೌಹಾರ್ದ ಕರ್ನಾಟಕ ಸಂಘಟನೆಯು ಹುತಾತ್ಮ ದಿನದ ಪ್ರಯುಕ್ತ ಮೈಸೂರಿನಲ್ಲಿ ಜನವರಿ 30ರಂದು ಆಯೋಜಿಸಿದ್ದ ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ ಅವರ ಕೆಲ ಚಿತ್ರಗಳು… ಕೃಪೆ- ಶ್ರೀ ಶ್ರೀನಿ]


    »
  • “ಆರ್ ಎಸ್ ಎಸ್ ಆಳ ಮತ್ತು ಅಗಲ”- ಆಡಿಯೋ ಬುಕ್…


    »