ಜೊತೆಜೊತೆಗೆ
ಮಹಾದೇವರ ಬದುಕು, ಬರಹ, ಹೋರಾಟ, ಜೀವನಪ್ರೀತಿಯ ಕುರಿತು ನಿಕಟವರ್ತಿಗಳ ಅನಿಸಿಕೆಗಳ ವೇದಿಕೆ ಈ ಜೊತೆಜೊತೆಗೆ.
-
ಶಿವಮೊಗ್ಗದ ‘TV BHARATH SHIVAMOGGA’ ಚಾನೆಲ್ ವತಿಯಿಂದ 2020 ನವೆಂಬರ್ ತಿಂಗಳು ಪೂರ್ತಿ ನಡೆದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಚರ್ಚೆ ‘ಸಿರಿಗಂಧ’ದಲ್ಲಿ ದೇವನೂರ ಮಹಾದೇವ ಅವರ ಬದುಕು-ಬರಹ ಕುರಿತು ಖ್ಯಾತ ವಿಮರ್ಶಕರಾದ ಪ್ರೊ.ರಾಜೇಂದ್ರ ಚೆನ್ನಿಯವರೊಂದಿಗೆ ಚಾನೆಲ್ ನಡೆಸಿದ ಚರ್ಚೆಯ ಯೂಟ್ಯೂಬ್ ಕೊಂಡಿ ಇಲ್ಲಿದೆ….
ಮುಂದೆ ನೋಡಿ -
[ 27.12.2012ರಂದು ಖ್ಯಾತ ಚಿತ್ರ ಕಲಾವಿದ ಕೆ.ಟಿ.ಶಿವಪ್ರಸಾದ್ ಅವರ ಸಂದರ್ಶನವನ್ನು ನಾಗರಾಜ್ ಹೆತ್ತೂರು ಅವರು ಅವಧಿ ಅಂತರ್ಜಾಲ ಪತ್ರಿಕೆಗೆ ಮಾಡಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ.]
ಮುಂದೆ ನೋಡಿ -
2020 ರ ಸುಧಾ ಯುಗಾದಿ ವಿಶೇಷಾಂಕದಲ್ಲಿ ಮಹಾದೇವ ಅವರ ಕುರಿತು ಜಯಂತ ಕಾಯ್ಕಿಣಿ ಅವರು ಬರೆದ ಕವಿತೆ ಪ್ರಕಟವಾಗಿದ್ದು…. ನಮ್ಮ ಓದಿಗಾಗಿ ಇಲ್ಲಿದೆ.
ಮುಂದೆ ನೋಡಿ -
[ದೇವನೂರ ಮಹಾದೇವ ಅವರ ಕುರಿತ ‘ನಮ್ಮ ಬನವಾಸಿ’ ಅಂತರ್ಜಾಲ ತಾಣಕ್ಕೆ ಐದು ವರ್ಷ ತುಂಬಿದ[29.12.2019] ಸಂದರ್ಭದಲ್ಲಿ ಪ್ರಜಾವಾಣಿ ಭಾನುವಾರದ ಪುರವಣಿಗಾಗಿ ಲೇಖಕಿ, ಕವಯಿತ್ರಿ ವಿಜಯಶ್ರೀ ಹಾಲಾಡಿಯವರು ಬರೆದ ಲೇಖನದ ಪೂರ್ಣ ಪಠ್ಯ ನಮ್ಮ ಬನವಾಸಿ ಓದುಗರಿಗಾಗಿ ಇಲ್ಲಿದೆ. ತಾಣದ ಕುರಿತು ಆಪ್ತ ಚಿತ್ರಣವನ್ನು ಕಟ್ಟಿಕೊಟ್ಟ ಲೇಖಕಿಗೆ ಹಾಗೂ ಲೇಖನವನ್ನು ಪ್ರಕಟಿಸಿ ಬೆಂಬಲಿಸಿದ ಪ್ರಜಾವಾಣಿಗೆ ಹೃದಯಪೂರ್ವಕ ವಂದನೆಗಳು.
-ಬನವಾಸಿಗರು]
ಮುಂದೆ ನೋಡಿ -
[ಕವಿ ಲಕ್ಷ್ಮೀಪತಿ ಕೋಲಾರ ಅವರು ದೇವನೂರ ಮಹಾದೇವ ಅವರ ಬಗ್ಗೆ ಬರೆದ ಒಂದು ಹಳೆಯ ಕವಿತೆ ನಮ್ಮ ಮರು ಓದಿಗಾಗಿ]
ಮುಂದೆ ನೋಡಿ -
ಮೈಸೂರಿನ ಆಂದೋಲನ ದಿನಪತ್ರಿಕೆಯು ನಮ್ಮ ಬನವಾಸಿಗೆ ನಾಲ್ಕು ವರ್ಷ ತುಂಬಿದ ಸಂದರ್ಭದಲ್ಲಿ 30.12.2018ರಂದು ಪ್ರಕಟಿಸಿದ ಸುದ್ದಿ.
ಮುಂದೆ ನೋಡಿ -
9.12.2018ರ ಆಂದೋಲನ ಪತ್ರಿಕೆಯ ಹಾಡುಪಾಡು ಪುರವಣಿಯ ವಾರದ ಅಂಕಣ ವಿಭಾಗದಲ್ಲಿ ಲೇಖಕ ಸುರೇಶ್ ಕಂಜರ್ಪಣೆಯವರು ಮೂರು-ನಾಲ್ಕು ದಶಕದ ಹಿಂದಿನ ದಲಿತ ಸಂಘರ್ಷ ಸಮಿತಿಯ ಧರಣಿಯ ದಿನಗಳ ನೆನಪಿನಲ್ಲಿ ಇಂದಿನ ಚಳವಳಿಯ ದಿಕ್ಕುದೆಸೆಯ ಅವಲೋಕನ ಮಾಡಿದ್ದಾರೆ. ಅದರಲ್ಲಿ ಆಗ ಲೋಕಸಭಾ ಸದಸ್ಯರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ದೇವನೂರ ಮಹಾದೇವ ಅವರು ಧರಣಿಯೊಂದರಲ್ಲಿ ಮುಖಾಮುಖಿಯಾದ ಕುರಿತು ಬರೆದಿದ್ದಾರೆ. ಲೇಖನ ನಮ್ಮ ಓದಿಗಾಗಿ ಇಲ್ಲಿದೆ.
ಮುಂದೆ ನೋಡಿ -
[ವಾರ್ತಾಭಾರತಿ ವಿಶೇಷಾಂಕ -2018ರಲ್ಲಿ ಹಿರಿಯ ಪತ್ರಕರ್ತ ಬಸು ಮೇಗಲಕೇರಿಯವರು ದೇವನೂರ ಮಹಾದೇವ ಅವರನ್ನು ಮತ್ತು ಅವರ ಕಥೆ ಕಾದಂಬರಿಗಳ ಪಾತ್ರವನ್ನು ಕುರಿತು ತಮ್ಮ ಮನೋವ್ಯಾಪಾರದ ಒಂದು ಮನೋಜ್ಞ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಅದು ನಮ್ಮೆಲ್ಲರ ಮರು ಓದಿಗಾಗಿ….]
ಮುಂದೆ ನೋಡಿ -
[ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ ಹಾಗೂ ಎಂ.ಎಚ್.ಕೃಷ್ಣಯ್ಯ ಅವರ ಸಂಪಾದಕತ್ವದಲ್ಲಿ 1990ರಲ್ಲಿ ಪ್ರಕಟವಾದ “ಸಾಲುದೀಪಗಳು” ಕೃತಿಯು ಸುಮಾರು ಒಂದು ಶತಮಾನ ಕಾಲದ ಹೊಸಗನ್ನಡ ಸಾಹಿತ್ಯದ ಪ್ರತಿಭಾನ್ವಿತರಲ್ಲಿ ಅರವತ್ತೇಳು ವ್ಯಕ್ತಿತ್ವಗಳನ್ನು ಕುರಿತ ಲೇಖನ ಮಾಲೆಯಾಗಿದ್ದು, ಇದರಲ್ಲಿ ದೇವನೂರ ಮಹಾದೇವ ಅವರ ಬದುಕು, ಬರಹ, ವ್ಯಕ್ತಿತ್ವ ಕುರಿತು ವಿಮರ್ಶಕ ಕೆ.ಸತ್ಯನಾರಾಯಣ ಅವರು ಬರೆದಿದ್ದಾರೆ. ಅದು ನಮ್ಮ ಮರು ಓದಿಗಾಗಿ…. ]
ಮುಂದೆ ನೋಡಿ -
[ಪ್ರೊ.ಕೆ.ಸುಮಿತ್ರಾಬಾಯಿ ಅವರ ಬಾಳ ಕಥನ ‘ಸೂಲಾಡಿ ಬಂದೋ ತಿರುತಿರುಗೀ’ ಮೈಸೂರಿನ ಅಭಿರುಚಿ ಪ್ರಕಾಶನದಿಂದ 2018ರಲ್ಲಿ ಮುದ್ರಣಗೊಂಡಿದ್ದು, ಅದರ ಕೆಲ ಭಾಗ ಕೆಂಡಸಂಪಿಗೆ ಅಂತರ್ಜಾಲ ಸಾಹಿತ್ಯ ಪತ್ರಿಕೆಯಲ್ಲಿ 21.6.2018ರಂದು ಅಗ್ರ ಲೇಖನವಾಗಿ ಪ್ರಕಟವಾಗಿದೆ. ನಮ್ಮ ಬನವಾಸಿ ಓದುಗರಿಗಾಗಿ ಆ ಬರಹ ಇಲ್ಲಿದೆ…..]
ಮುಂದೆ ನೋಡಿ