ಒಡಲಾಳ

ಮಹಾದೇವರ ಇಷ್ಟ, ಪ್ರೀತಿ, ಆಯ್ಕೆ, ಅಭಿರುಚಿ, ಮನದಾಳದ ಮಿಡಿತಗಳ ಎಂದಿಗೂ ಮುಗಿಯದ ದೊಡ್ಡ ಕ್ಯಾನ್ವಾಸು ಈ ಒಡಲಾಳ.

 

  • ಮೈಸೂರಿನ ನಾರಾಯಣಶಾಸ್ತ್ರೀ ರಸ್ತೆಯಲ್ಲಿರುವ ಶತಮಾನಕ್ಕಿಂತಾ ಹಳೆಯದಾದ ಮಹಾರಾಣಿ ಸರಕಾರಿ ಪ್ರಾಥಮಿಕ ಶಾಲೆಯನ್ನು ರಾಮಕೃಷ್ಣಾಶ್ರಮದ ವಶಕ್ಕೆ ಒಪ್ಪಿಸಲು ಇಂದು[ 12.10.2019] ಶಿಕ್ಷಣಾಧಿಕಾರಿಗಳು ಪೊಲೀಸರೊಂದಿಗೆ ಆಗಮಿಸಿದ್ದರು.ವಿಷಯ ತಿಳಿದ ಸಾಹಿತಿ ದೇವನೂರ ಮಹಾದೇವ ಅವರು ಶಾಲೆಗೆ ಆಗಮಿಸಿ, ಒತ್ತಾಯ ನಡೆಸುತ್ತಿರುವವರನ್ನು ಭೇಟಿಮಾಡಿ ಅವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.


    ಮುಂದೆ ನೋಡಿ
  • ಮಹಾತ್ಮಾ ಗಾಂಧೀಜಿಯವರ 150 ನೆಯ ವರ್ಷಾಚರಣೆಗೆ “ನಮ್ಮ ಬನವಾಸಿ” ವಿಶೇಷ – “ಗಾಂಧಿಗೆ 150: ದೇವನೂರರ ಕಣ್ಣೋಟ” – ವಿಶೇಷ ಸಂದರ್ಶನ [ಮೈಸೂರಿನ ಆಂದೋಲನ ದಿನಪತ್ರಿಕೆಯಲ್ಲಿ 2.10.2019 ರಂದು ಮರು ಪ್ರಕಟಣೆಗೊಂಡಿದೆ]

    [ದಿ ಇಂಡಿಯನ್ ಎಕ್ಸ್‍ಪ್ರೆಸ್ [ನವದೆಹಲಿ ಆವೃತ್ತಿ] ಅಮೃತಾ ದತ್ ಅವರ ಪ್ರಶ್ನೆಗಳು.]


    ಮುಂದೆ ನೋಡಿ
  • [An Interview in The Indian Express[New Delhi Version] by Amrita Dutta Published on September 29, 2019, Devanoora Mahadeva’s responses were translated into English by Rashmi Munikempanna. [ಅಮೃತಾ ದತ್ತಾ ಅವರು ನಡೆಸಿದ ದೇವನೂರ ಮಹಾದೇವ ಅವರ ಸಂದರ್ಶನವು ಸೆಪ್ಟೆಂಬರ್ 29, 2019 ರ The Indian Express [ನವದೆಹಲಿ ಆವೃತ್ತಿ]ನಲ್ಲಿ ಪ್ರಕಟವಾಗಿದೆ. ದೇವನೂರ ಮಹಾದೇವ ಅವರ ಪ್ರತಿಕ್ರಿಯೆಗಳನ್ನು ರಶ್ಮಿ ಮುನಿಕೆಂಪಣ್ಣ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.]


    ಮುಂದೆ ನೋಡಿ
  • ಪ್ರಜಾವಾಣಿ ವಾರ್ತೆ 31.7.2019

    [ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಪಡಿಸಿರುವುದಕ್ಕೆ ಸಮಾಜದ ವಿವಿಧ ವರ್ಗದ ಜನರಿಂದ ಪರ–ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಡಿಯೂರಪ್ಪ ಅವರ ಮೊದಲ ಪ್ರಮುಖ ನಿರ್ಧಾರವೇ ಒಂದು ಕೋಮಿನ ವಿರುದ್ಧ ಆಗಿರುವುದಕ್ಕೆ ಸಹ ಆಕ್ಷೇಪ ಎದುರಾಗಿದೆ. ದೇವನೂರ ಮಹಾದೇವ ಅವರ ಅಭಿಪ್ರಾಯ ಹೀಗಿದೆ.]


    ಮುಂದೆ ನೋಡಿ
  • ಪ್ರಸಕ್ತ ರಾಜಕೀಯ ಸನ್ನಿವೇಶವನ್ನು ಕುರಿತು ದೇವನೂರ ಮಹಾದೇವ ಅವರು 22.7.2019 ರಂದು “ನಾನು ಗೌರಿ.ಕಾಂ” ಆನ್ ಲೈನ್ ಪತ್ರಿಕೆಗೆ ನೀಡಿದ ಸಂದರ್ಶನ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ……


    ಮುಂದೆ ನೋಡಿ
  • ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ ಮತ್ತು ಹಿರಿಯ ಸಾಹಿತಿಗಳೂ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರೂ ಆದ ದೇವನೂರ ಮಹಾದೇವ ಅವರು ಕರ್ನಾಟಕದಲ್ಲಿ ಅತೃಪ್ತ ಶಾಸಕರು ಸೃಷ್ಟಿಸಿರುವ ರಾಜಕೀಯ ಅವಾಂತರ ಕುರಿತಂತೆ, ಪಕ್ಷಾಂತರಿ ಶಾಸಕರ ವಿರುದ್ದ ರಾಜ್ಯ ವಿಧಾನಭೆಯ ಸಭಾಧ್ಯಕ್ಷರಿಗೆ 15.7.2019 ರಂದು ದೂರು ಸಲ್ಲಿಸಿದ್ದಾರೆ.                              


    ಮುಂದೆ ನೋಡಿ
  • [This Report Published in THE HINDU news paper on 21.4.2019. ಈ ವರದಿಯು ದಿ ಹಿಂದೂ ಪತ್ರಿಕೆಯಲ್ಲಿ 21.4.2019ರಂದು ಪ್ರಕಟವಾಗಿದೆ. ]


    ಮುಂದೆ ನೋಡಿ
  •    21.4.2019ರ ಸಂಯುಕ್ತ ಕರ್ನಾಟಕದಲ್ಲಿ ದೇವನೂರ ಮಹಾದೇವ ಅವರ ಸಂದರ್ಶನ -ಡಾ.ಎಸ್ ತುಕಾರಾಂ ಅವರಿಂದ


    ಮುಂದೆ ನೋಡಿ
  • ರಾಜ್ಯ ಸರಕಾರ ತರಲು ಹೊರಟಿರುವ ಭೂ ಸ್ವಾಧೀನ ಕಾಯಿದೆ ತಿದ್ದುಪಡಿ ಮಸೂದೆಯನ್ನು ರಾಜ್ಯಪಾಲರು ಅಂಗೀಕಾರ ಮಾಡಬಾರದೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ, ಸ್ವರಾಜ್ ಇಂಡಿಯಾ ಕರ್ನಾಟಕ ಮತ್ತು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮೈಸೂರಿನಲ್ಲಿ 9.3.2019ರಂದು ದೇವನೂರ ಮಹಾದೇವ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಅದರ ಆಂದೋಲನ ಪತ್ರಿಕಾ ವರದಿ ನಮ್ಮ ಓದಿಗಾಗಿ …


    ಮುಂದೆ ನೋಡಿ
  • ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ 18.2.2019ರಂದು ನಡೆದ ರೈತ ನಾಯಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಕಂಚಿನ ಪ್ರತಿಮೆ ಅನಾವರಣ ಸಂದರ್ಭದಲ್ಲಿ ‘ರೈತ ಆತ್ಮಹತ್ಯೆ’ ಪುಸ್ತಕ ಬಿಡುಗಡೆಗೊಳಿಸಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪ್ರಜಾವಾಣಿ ಪತ್ರಿಕಾ ವರದಿ ..


    ಮುಂದೆ ನೋಡಿ